ಯೇಸುಕ್ರಿಸ್ತನು ಪರಲೋಕದ ದೇವದರ್ಶನ ಗುಡಾರದಲ್ಲಿ ಮನುಷ್ಯನ ಮಧ್ಯವರ್ತಿಯಾಗಿ ತನ್ನ ಕಾರ್ಯ ಮುಗಿಸಿದಾಗ, ಮಹಾಸಂಕಟದ ಸಮಯ ಆರಂಭವಾಗುವುದು. ಪ್ರತಿಯೊಬ್ಬರ ಪಕರಣವು ಈಗಾಗಲೇ ನಿರ್ಧಾರಿತವಾಗಿರುತ್ತದೆ ಮತ್ತು ಪಾಪವನ್ನು ಶುದ್ಧೀಕರಿಸಲು ಬೇರಾವುದೇ ದೋಷಪರಿಹಾರಕ ರಕ್ತವಿರುವುದಿಲ್ಲ, ಆಗ ‘ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ತನ್ನ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ’ ಎಂಬ ಗಂಭೀರವಾದ ಘೋಷಣೆಯಾಗುವುದು (ಪ್ರಕಟನೆ 22:11), ಆಗ ದೇವರ ಪರಿಶುದ್ಧಾತ್ಮನ ಶಕ್ತಿಯು ಈ ಲೋಕದಿಂದ ಹಿಂದೆಗೆಯಲ್ಪಡುವುದು (ಪೇಟಿಯಾರ್ಕ್ ಅಂಡ್ ಪ್ರಾಫೆಟ್ಸ್,201). ಕೊಕಾಘ 148.1