Go to full page →

ನಗರಗಳಲ್ಲಿ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ ಕೊಕಾಘ 67

ಕರ್ತನಾದ ಯೇಸುಕ್ರಿಸ್ತನ ಬರೋಣದ ಸಿದ್ಧತೆಗಾಗಿ ನಾವು ಮಹಾನಗರಗಳಲ್ಲಿ ಹೆಚ್ಚಾದ ಸೇವೆ ಮಾಡಬೇಕಾಗಿದೆ. ಈ ಸ್ಥಳಗಳಲ್ಲಿ ಗಂಭೀರವಾದ ಸಾಕ್ಷಿಯನ್ನು ನಾವು ಕೊಡಬೇಕಾಗಿದೆ. ಅಲ್ಲದೆ ಸುವಾರ್ತಾ ಸೇವಕರನ್ನು ಉತ್ತೇಜಿಸಬೇಕಾಗಿದೆ. ವ್ಯಾಪಾರ ವ್ಯವಹಾರವೇ ಪ್ರಮುಖವಾಗಿರುವ ವಾಣಿಜ್ಯ ಕೇಂದ್ರಗಳಿಗೆ ಅಂತ್ಯಕಾಲದ ಎಚ್ಚರಿಕೆಯ ಸಂದೇಶವು ಪ್ರಾಮಾಣಿಕವಾಗಿ ಕೊಡಲ್ಪಟ್ಟಿಲ್ಲ. ಸ್ತ್ರೀಪುರುಷರು ಈ ಕೇಂದ್ರಗಳಲ್ಲಿ ತುಂಬಿರುತ್ತಾರೆ. ಅವರಿಗೂ ಸಹ ಕೊನೆಯಕಾಲದ ಸತ್ಯದ ಅಗತ್ಯವಿದೆ. ಆದರೆ ಈ ಸ್ತ್ರೀಪುರುಷರಿಗೆ ಸತ್ಯಸಂದೇಶದ ಅಮೂಲ್ಯವಾದ ಜ್ಞಾನವು ತಿಳಿದಿಲ್ಲ. ಯಾಕೆಂದರೆ ವಾಣಿಜ್ಯ ಕೇಂದ್ರಗಳಲ್ಲಿ ವ್ಯವಹಾರದಲ್ಲಿ ತೊಡಗಿರುವ ಈ ವರ್ಗದ ಜನರಿಗೆ ಸಂದೇಶ ಸಾರಲು ನಾವು ಪ್ರಾಮಾಣಿಕವಾದ ಹಾಗೂ ಸತತವಾದ ಪ್ರಯತ್ನ ಮಾಡಿಲ್ಲ (ಕೌನ್ಸೆಲ್ಸ್ ಟು ರೈಟರ್ಸ್, 14, 1909). ಕೊಕಾಘ 67.3

ಮೂರುದೂತರ ವರ್ತಮಾನವು ಈಗ ಸಾರಲ್ಪಡಬೇಕಾಗಿದೆ. ದೂರದೇಶಗಳಲ್ಲಿ ಮಾತ್ರವಲ್ಲದೆ, ಹತ್ತಿರದಲ್ಲಿ ರಕ್ಷಿಸಲ್ಪಡದಿರುವ ಹಾಗೂ ಕೊನೆಯ ಕಾಲದ ಎಚ್ಚರಿಕೆಯ ಸಂದೇಶವನ್ನು ಕೇಳದವರಿಗೂ ಸಾರಬೇಕಾಗಿದೆ. ಪ್ರಾಮಾಣಿಕರಾಗಿ, ಮನಃಪೂರ್ವಕವಾಗಿ ದೇವರ ಸೇವೆ ಮಾಡುವವರ ಅಗತ್ಯ ನಗರಗಳಿಗಿದೆ (ರಿವ್ಯೂ ಅಂಡ್ ಹೆರಾಲ್ಡ್, ನವೆಂಬರ್ 17, 1910). ಕೊಕಾಘ 68.1