ಹಿಂಸೆಯೆಂಬ ಬಿರುಗಾಳಿ ನಿಜವಾಗಿಯೂ ಬಂದಾಗ, ಒಳ್ಳೆ ಕುರಿಗಳು ಒಳ್ಳೆ ಕುರುಬನ ಸ್ವರವನ್ನು ಕೇಳುವವು. ಕಳೆದುಹೋದ ಕುರಿಯನ್ನು ಹುಡುಗಲು ಎಲ್ಲಾ ರೀತಿಯ ನಿಸ್ವಾರ್ಥದ ಪ್ರಯತ್ನಗಳನ್ನು ಮಾಡುವಾಗ, ಮಂದೆಯನ್ನು ಬಿಟ್ಟು ಹೋಗಿರುವ ಅನೇಕರು ಹಿರೀ ಕುರುಬನನ್ನು ಹಿಂಬಾಲಿಸಲು ತಿರುಗಿ ಬರುವರು. ದೇವಜನರು ಒಟ್ಟಾಗಿ ಶತ್ರುವಿನ ಮುಂದೆ ಐಕ್ಯತೆ ತೋರಿಸುವರು. ಅವರಲ್ಲಿ ಸ್ವಾರ್ಥಭಾವನೆ ಇಲ್ಲದಿರುವುದರಿಂದ, ತಮ್ಮಲ್ಲಿ ಯಾರು ದೊಡ್ಡವರೆಂಬ ವಾದ ವಿವಾದವು ಅವರಲ್ಲಿರುವುದಿಲ್ಲ (ಟೆಸ್ಟಿಮೊನೀಸ್ ಸಂಪುಟ 6, ಪುಟ 401, 1900), ಕೊಕಾಘ 87.3