Go to full page →

ಹಿಂಗಾರು ಮಳೆಯು ಮಹಾಶಬ್ದ ಉಂಟುಮಾಡುತ್ತದೆ ಕೊಕಾಘ 108

ಹಿಂಗಾರು ಮಳೆಯು ಮೂರನೇ ದೂತನ ಮಹಾಶಬಕ್ಕೆ ಬಲಕೊಡಲು ಹಾಗೂ ದೇವಭಕ್ತರನ್ನು ಕೊನೆಯ ಏಳು ಉಪದ್ರವಗಳನ್ನು ಎದುರಿಸಲು ಸಿದ್ಧಪಡಿಸಲು ದೇವರ ಸನ್ನಿಧಾನದಿಂದ ಹೊಸ ಚೈತನ್ಯ ಕೊಡಲು ಸುರಿಸಲ್ಪಡುತ್ತದೆ (ಅರ್ಲಿ ರೈಟಿಂಗ್ಸ್, ಪುಟ 86, 1854), ಸುವಾರ್ತೆ ಎಂಬ ಆಯುಧ ಧರಿಸಿಕೊಂಡಿರುವವರು ಸತ್ಯವನ್ನು ಮಹಾಶಬ್ದದಿಂದ ಸಾರುವುದನ್ನು ಶ್ರೀಮತಿ ವೈಟಮ್ಮನವರು ಕೇಳಿದರು. ಅದು ಪರಿಣಾಮ ಉಂಟು ಮಾಡಿತು. ಈ ಬದಲಾವಣೆಗೆ ಕಾರಣವೇನೆಂದು ಅವರು ದೇವದೂತನನ್ನು ಕೇಳಿದರು, ಅದಕ್ಕೆ ಅವನು ‘ಇದು ಕರ್ತನ ಸನ್ನಿಧಾನದಿಂದ ಬಂದ ಹೊಸ ಚೈತನ್ಯ ನೀಡುವ ಹಿಂಗಾರು ಮಳೆ ಹಾಗೂ ಮೂರನೇ ದೂತನ ಮಹಾಶಬ್ದವಾಗಿದೆ ಎಂದು ಉತ್ತರಿಸಿದನು (ಪುಟ 271). ಕೊಕಾಘ 108.1