Go to full page →

ಅನ್ಯಾಯವಾದ ಟೀಕೆಯು ಆತ್ಮಗಳ ನಷ್ಟಕ್ಕೆ ಕಾರಣವಾಗುತ್ತದೆ ಕೊಕಾಘ 101

ಒಂದು ಸಮಯದಲ್ಲಿ ಸತ್ಯದಲ್ಲಿ ನೆಲೆಯೂರಿದ್ದ ಸಂಪೂರ್ಣ ಕುಟುಂಬಗಳು ನಮ್ಮ ಮಧ್ಯದಲ್ಲಿ ಇದ್ದವು ಹಾಗೂ ಈಗಲೂ ಇವೆ. ಆದರೆ ಅವರು ಹೆಚ್ಚಾಗಿ ಪ್ರೀತಿಸಿದ್ದ ಹಾಗೂ ಸಲಹೆಗಳನ್ನು ಪಡೆದುಕೊಂಡಿದ್ದವರು ಮಾಡುವ ದುರುದ್ದೇಶದಿಂದ ಕೂಡಿದ ಸುಳ್ಳು ಆಪಾದನೆಗಳಿಂದ ಅವರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅವರು ಹಣಜಿಯನ್ನು ಬಿತ್ತುವುದಕ್ಕೆ ತಮ್ಮ ಹೃದಯಗಳಲ್ಲಿ ಸ್ಥಳ ಕೊಡುತ್ತಾರೆ ಹಾಗೂ ಗೋಧಿಯ ಮಧ್ಯೆ ಹಣಜಿ ಬೆಳೆದು ಬಲಗೊಳ್ಳುತ್ತದೆ. ಇದರಿಂದಾಗಿ ಗೋಧಿಯ ಬೆಳೆಯು ಕಡಿಮೆಯಾಗುತ್ತಾ ಬಂದು, ಅಮೂಲ್ಯವಾದ ಸತ್ಯವು ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, 411, 1898). ಕೊಕಾಘ 101.4