Go to full page →

ಹೊಸದಾಗಿ ಅಡ್ವೆಂಟಿಸ್ಟರಾದವರು ಸಭೆಯನ್ನು ಬಿಟ್ಟುಹೋದವರ ಸ್ಥಾನ ತುಂಬುವರು ಕೊಕಾಘ 105

ಕೆಲವರು ಜರಡಿ ಹಿಡಿಯಲ್ಪಟ್ಟು ಹೊಟ್ಟಿನಂತೆ ಹಾರಿ ಹೋಗಿದ್ದಾರೆ. ದೇವರ ಕೊನೆಯ ಎಚ್ಚರಿಕೆಗೆ ಗಮನ ನೀಡದೆ ಉದಾಸೀನತೆ ತೋರಿದವರು ಜಯಹೊಂದುವುದಿಲ್ಲ. ಬದಲಾಗಿ ಆಕೆ ಅಂಧಕಾರದಲ್ಲಿ ಅವರು ಬೀಳುವರು. ಅವರ ಸ್ಥಾನವನ್ನು ತಕ್ಷಣವೇ ಸತ್ಯವನ್ನು ಹೊಸದಾಗಿ ಅಂಗೀಕರಿಸಿಕೊಂಡ ಅಡ್ವೆಂಟಿಸ್ಟರು ತುಂಬಲಿದ್ದಾರೆ (ಎವಾಂಜಲಿಸಮ್, ಪುಟ 27, 1858). ಕೊಕಾಘ 105.1

ನಂಬಿಕೆಯನ್ನು ಬಿಟ್ಟು ಹೋದವರ ಸ್ಥಳವನ್ನು ತುಂಬಲು ಹೊಸದಾಗಿ ಬಂದವರನ್ನು ಯೇಸುಸ್ವಾಮಿಯು ಹೇಳಿದ ಮನೆಯ ಯಜಮಾನನ ಸಾಮ್ಯದಲ್ಲಿ ಸಾಯಂಕಾಲ ಐದುಗಂಟೆಗೆ ಕೂಲಿಗೆ ಬಂದವರಿಗೆ ಕ್ರಿಸ್ತನು ಹೋಲಿಸುತ್ತಾನೆ (ಮತ್ತಾಯ 20:18,9), ದೇವರಾತ್ಮನು ಇನ್ನೂ ಸಹ ಅನೇಕರಲ್ಲಿ ಹೋರಾಡುತ್ತಿದ್ದಾನೆ, ಈಗ ಸತ್ಯವೇನೆಂದು ತಿಳಿದುಕೊಳ್ಳಲು ಅವಕಾಶವಿಲ್ಲದವರಿಗೆ ದೇವರ ವಿನಾಶಕರ ತೀರ್ಪಿನ ಸಮಯವು ಕೃಪೆಯ ಕಾಲವಾಗಿದೆ. ಅವರ ಮೇಲೆ ಆತನು ಕನಿಕರ ತೋರಿಸುತ್ತಾನೆ. ತನ್ನನ್ನು ಅಂಗೀಕರಿಸದವರಿಗೆ ಬಾಗಿಲು ಮುಚ್ಚಲ್ಪಟ್ಟಿರುವಾಗಲೂ, ದೇವರ ಹಸ್ತವು ರಕ್ಷಿಸಲು ಚಾಚಿಕೊಂಡಿದೆ. ಕೊನೆಯ ಕಾಲದಲ್ಲಿ ಮೊದಲ ಬಾರಿಗೆ ಸತ್ಯವನ್ನು ಕೇಳಿದವರು ಅಪಾರ ಸಂಖ್ಯೆಯಲ್ಲಿ ಸಭೆಗೆ ಸೇರುತ್ತಾರೆ. ಕೊಕಾಘ 105.2

ದೇವರ ಸೈನ್ಯದಿಂದ ಸಾಕಷ್ಟು ಜನರು ಶತ್ರುವಾದ ಸೈತಾನನೊಂದಿಗೆ ಸೇರುವರು, ಆದರೆ ಈಗ ಸೈತಾನನೊಂದಿಗಿರುವವರು ಅಪಾರ ಸಂಖ್ಯೆಯಲ್ಲಿ ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರೊಂದಿಗೆ ಸೇರುವರು (ಟೆಸ್ಟಿಮೊನಿಸ್, ಸಂಪುಟ 8, ಪುಟ 41, 1904). ಕೊಕಾಘ 105.3

*****